WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Friday, July 12, 2013

'ಸುಭಾಷಿತ ಮಂಜರಿ'

ಇಂದು ಶಿವಮೊಗ್ಗದಲ್ಲಿ 'ಸುಭಾಷಿತ ಮಂಜರಿ' ಎಂಬ ಪುಸ್ತಕ ನೋಡಿದೆ. ಹಲವು ಸಂಸ್ಕೃತ ಗ್ರಂಥಗಳಿಂದ ಆರಿಸಿದ ಸುಭಾಷಿತಗಳಿಗೆ ಕನ್ನಡ ಅನುವಾದವನ್ನು ಕೊಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಈ ಸಂಪಾದಿತ ಕೃತಿ 500 ಪುಟಗಳನ್ನು ಒಳಗೊಂಡಿದ್ದು ಬೆಲೆ 150 ರೂಪಾಯಿ. 

'ಅಮ್ಮ ಹೇಳಿದ ಎಂಟು ಸುಳ್ಳುಗಳು'

ಎ ಆರ್ ಮಣಿಕಾಂತ್ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕ ಓದಿದೆ. ಸ್ಫೂರ್ತಿದಾಯಕ ಅಂಕಣ ಬರಹಗಳ ಸಂಕಲನವಿದು. ಕೆಲವು ಲೇಖನಗಳು real incidentಗಳನ್ನು ಆಧರಿಸಿದ್ದರೆ, ಇನ್ನು ಕೆಲವು reel ಎನಿಸುತ್ತವೆ. ಕೆ ಎಸ್ ನರಸಿಂಹಸ್ವಾಮಿಯವರ "ರಾಯರು ಬಂದರು ಮಾವನ ಮನೆಗೆ" ಹಾಡಿನ ಕುರಿತಾದ ಲೇಖನ ಸೊಗಸಾಗಿದೆ. 150 ಪುಟಗಳ ಈ ಪುಸ್ತಕದ ಬೆಲೆ 90 ರೂಪಾಯಿಗಳು.

Sunday, July 7, 2013

'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು'

ಕೃಪಾಕರ ಸೇನಾನಿ ಅವರ 'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು' ಪುಸ್ತಕ ಓದಿದೆ. ವೀರಪ್ಪನ್ ಅವರನ್ನು ಅಪಹರಣ ಮಾಡಿದ ದಿನದ ವಿವರಗಳನ್ನು ಇಬ್ಬರೂ ನಿರೂಪಿಸಿದ್ದರೂ ಉಳಿದ ವಿವರಗಳನ್ನು ಕೃಪಾಕರ ಅವರೇ ನಿರೂಪಿಸಿದ್ದಾರೆ. ಬರೆವಣಿಗೆಯ ಶೈಲಿ ತೇಜಸ್ವಿಯವರ ಶೈಲಿಯನ್ನು ನೆನಪಿಸುತ್ತದೆ. ಪುಸ್ತಕ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಪುಸ್ತಕ ಪ್ರಕಾಶನದವರು ಪ್ರಕಟಿಸಿದ್ದಾರೆ.