Wednesday, September 26, 2012

ನನ್ನ ಗುರು ಗಿರಿಗೌಡರು

ನನ್ನ ಗುರುಗಳಾಗಿದ್ದ ಗಿರಿಗೌಡರ ಬಗ್ಗೆ ನಾನು ಬರೆದ ಲೇಖನ 'ಟೀಚರ್' ಪತ್ರಿಕೆಯಲ್ಲಿ ಪ್ರಕಟವಾಗಿದೆ.


ನಾನು ಈ ಹಿಂದೆ ಗಿರಿಗೌಡರ ಬಗ್ಗೆ ಬರೆದಿದ್ದ ಕವನ



Saturday, September 22, 2012

ಕುಣಿಗಲ್

ಕುಣಿಗಲ್ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ.
ಕುಣಿಗಲ್ - ವಿಕಿಪೀಡಿಯ:

                                                         ಕುಣಿಗಲ್ ನಲ್ಲಿರುವ ಕುದುರೆ ಫಾರಂ


                                                                ಮಾರ್ಕೋನಹಳ್ಳಿ ಜಲಾಶಯ


ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ


                                                     ಕುಣಿಗಲ್ ಕೆರೆಯ ಒಂದು ಸುಂದರ ನೋಟ




 ಕುಣಿಗಲ್ ಕೆರೆಯ ಏರಿಯ ಮೇಲಿರುವ ಸೋಮೇಶ್ವರ ದೇವಾಲಯ


Tuesday, September 11, 2012

ಯಕ್ಷಗಾನ ಗೊಂಬೆಯಾಟ

ಇಂದು ಹೊಸನಗರದ ವಿದ್ಯಾಸಂಘದಲ್ಲಿ 'ಜೇಸಿ ಹಬ್ಬ-2012' ಅಂಗವಾಗಿ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇವರು ನಡೆಸಿಕೊಟ್ಟ 'ಲಂಕಾದಹನ' ಯಕ್ಷಗಾನ ಗೊಂಬೆಯಾಟ ನೋಡಿದೆ. ಗೊಂಬೆಯಾಟದ ನಂತರ ಪ್ರಾತ್ಯಕ್ಷಿಕೆ ನೀಡಿದರು. ಜೇಡ, ಆಮೆ ಮುಂತಾದ ಗೊಂಬೆಗಳನ್ನು ಪ್ರದರ್ಶಿಸಿದರು. ತಾವು ನಡೆಸಿರುವ ಪ್ರಯೋಗಗಳನ್ನು ಪ್ರದರ್ಶಿಸಿದರು.
ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಗೆ 350 ವರ್ಷಗಳ ಇತಿಹಾಸವಿದ್ದು ವಿದೇಶಗಳಲ್ಲೂ ಪ್ರದರ್ಶನಗಳನ್ನು ನೀಡಿದೆ. ತನ್ನದೇ ವೆಬ್ ಸೈಟ್ ಕೂಡ ಹೊಂದಿದೆ: http://www.yakshaganapuppets.com 

Wednesday, September 5, 2012

ಶ್ರೀಕಂಠ ಕೂಡಿಗೆ ಹೇಳಿದ್ದು

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶ್ರೀಕಂಠ ಕೂಡಿಗೆ ಅವರು ಹೇಳಿದ್ದು:
ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದೇ ಒಂದು ದುರಂತ.
ಸ್ವತಂತ್ರ ಭಾರತದ 65 ವರ್ಷಗಳ ಇತಿಹಾಸದಲ್ಲಿ ಅನಕ್ಷರಸ್ಥ ಜಾತಿವಾದಿ ಅಕ್ಷರಸ್ಥ ಜಾತಿವಾದಿಯಾಗಿದ್ದಾನೆ. ಅನಕ್ಷರಸ್ಥ ಕೋಮುವಾದಿ ಅಕ್ಷರಸ್ಥ ಕೋಮುವಾದಿಯಾಗಿದ್ದಾನೆ.
ಕೆಎಎಸ್, ಐಎಎಸ್ ಪಾಸಾದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಲು ಪದವಿಗಳ ಅಗತ್ಯವಿದೆಯೇ?

ಒಂದನೇ ತಾರೀಖಿಗೇ ಸಂಬಳ

ಸಾಮಾನ್ಯವಾಗಿ ಶಿಕ್ಷಕರಿಗೆ ಸಂಬಳ ಆಗುವುದು 5ನೇ ತಾರೀಖಿನಿಂದ 15ನೇ ತಾರೀಖಿನ ನಡುವೆ. ಆದರೆ ಈ ತಿಂಗಳು ಒಂದನೇ ತಾರೀಖಿಗೇ ಸಂಬಳ ಆಗಿದೆ. ಶಿಕ್ಷಕರ ದಿನಾಚರಣೆ ವಿಶೇಷ!