WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Tuesday, January 22, 2013

ಓದುಗರ ಚಾವಡಿ

ಮೊನ್ನೆ (ಭಾನುವಾರ) ಹುಂಚ(ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ)ಕ್ಕೆ ಹೋಗಿದ್ದೆ. ನಮ್ಮ ಶಾಲೆಯ ಕನ್ನಡ ಶಿಕ್ಷಕರು ಅಲ್ಲಿ 'ಓದುಗರ ಚಾವಡಿ' ಕಾರ್ಯಕ್ರಮ ನಡೆಯುವುದಾಗಿ ತಿಳಿಸಿದ್ದರು. ಅದು ಆರೆಸ್ಸೆಸ್ಸಿನ ಒಂದು ಉಪಶಾಖೆ ಎಂಬುದು ಅಲ್ಲಿಗೆ ಹೋದ ಮೇಲಷ್ಟೇ ತಿಳಿಯಿತು. ತಿಂಗಳಿಗೆ ಒಮ್ಮೆ ಒಂದು ಸ್ಥಳದಲ್ಲಿ ಇಂಥ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಸದಸ್ಯರು ಒಂದು ಪುಸ್ತಕವನ್ನು ಕೊಂಡುಕೊಳ್ಳಬೇಕು. ಮುಂದಿನ ಕಾರ್ಯಕ್ರಮದಲ್ಲಿ ಒಂದು ಅಧ್ಯಾಯವನ್ನು ಓದಿಕೊಂಡು ಬಂದು ಅದರಲ್ಲಿನ ವಿಚಾರವನ್ನು ಮಂಡಿಸಬೇಕು. ಅಂದು ಆಯ್ದುಕೊಂಡಿದ್ದ ಪುಸ್ತಕ ......ಶಾಸ್ತ್ರಿಯವರ 'ಯಾವುದು ಚರಿತ್ರೆ?' (ಅನು: ಬಾಬು ಕೃಷ್ಣಮೂರ್ತಿ). ಪ್ರಕಾಶಕರು: ದ್ರಾವಿಡ ವಿಶ್ವವಿದ್ಯಾಲಯ. ಪುಸ್ತಕದ ಬೆಲೆ 200 ರೂಪಾಯಿಗಳು. ಶಿವಣ್ಣ ಎಂಬುವವರು ಈ ಕಾರ್ಯಕ್ರಮದ ಸಂಘಟಕರು. ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಈ ಪುಸ್ತಕದ 1000 ಪ್ರತಿಗಳನ್ನು ಮಾರಾಟ ಮಾಡಿದ್ದಾರಂತೆ. ಇದರಿಂದ ಹೈದರಾಬಾದಿನಲ್ಲಿರುವ ಮೂಲ ಲೇಖಕರಿಗೇ ಆಶ್ಚರ್ಯವಾಗಿದೆಯಂತೆ! ನಾನು ಆ ಪುಸ್ತಕವನ್ನು ಹಾಗೇ ಕಣ್ಣಾಡಿಸಿದೆ. ಭಾರತದ ಚರಿತ್ರೆಯನ್ನು ತಿರುಚಲಾಗಿದೆ ಎಂಬುದು ಲೇಖಕರ ಅಂಬೋಣ. ಮ್ಯಾಕ್ಸ್ ಮುಲ್ಲರ್ ಬಗ್ಗೆ ಒಂದು ಅಧ್ಯಾಯವಿದೆ. ಮ್ಯಾಕ್ಸ್ ಮುಲ್ಲರ್ ಅವರು ಬರೆದಿರುವ ಒಂದೆರಡು ಪತ್ರಗಳಿಂದ ಅವರ ಅಗಾಧ ಕಾರ್ಯವನ್ನು ಅಳೆಯಲಾಗಿದೆ! ಮ್ಯಾಕ್ಸ್ ಮುಲ್ಲರ್ ಮಾಡಿದ್ದು ಕೂಲಿ ಕೆಲಸವಂತೆ! ಇಷ್ಟು ಪುಟ ಅಚ್ಚಿಗೆ ಸಿದ್ಧಪಡಿಸಿದರೆ ಇಷ್ಟು ಸಂಭಾವನೆ ಎಂದು ನಿಗದಿಪಡಿಸಲಾಗಿತ್ತಂತೆ! ಬ್ರಿಟಿಷರು ವೇದ ಉಪನಿಷತ್ತುಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿಸಿದ್ದರ ಹಿಂದೆ ಅವುಗಳಲ್ಲಿರುವ ಹುಳುಕುಗಳನ್ನು ಬಯಲಿಗೆಳೆಯುವ ಉದ್ದೇಶವಿತ್ತಂತೆ! ಪುಸ್ತಕದ ತುಂಬ ಇಂಥ ಅಸಂಬದ್ಧಗಳೇ ತುಂಬಿದ್ದಂತೆ ಕಂಡಿತು. 

No comments:

Post a Comment